MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • ಪರ ಭಾಷೆಗಳಲ್ಲಿ ಸಿನಿಮಾ ಆಗಿ ಬಾಕ್ಸ್ ಆಫೀಸ್ ಚಿಂದಿ ಮಾಡಿದ ಅಚ್ಚ ಕನ್ನಡದ, ಕನ್ನಡಿಗರ ಕಥೆಗಳು

ಪರ ಭಾಷೆಗಳಲ್ಲಿ ಸಿನಿಮಾ ಆಗಿ ಬಾಕ್ಸ್ ಆಫೀಸ್ ಚಿಂದಿ ಮಾಡಿದ ಅಚ್ಚ ಕನ್ನಡದ, ಕನ್ನಡಿಗರ ಕಥೆಗಳು

ಪರ ಭಾಷೆಯಲ್ಲಿ ಕನ್ನಡದ ಧೀಮಂತ ವ್ಯಕ್ತಿಗಳ, ನಾಯಕರ, ನಾಡಿನ ಕಥೆಗಳು ಸಿನಿಮಾವಾಗಿ ಮೂಡಿ ಬಂದು ಯಶಸ್ಸು ಕಾಣುತ್ತಿದೆ. ಆದರೆ ಕನ್ನಡದಲ್ಲಿ ಮಾತ್ರ ಕನ್ನಡದ ಕಥೆಗಳೇ ಬರ್ತಿಲ್ವಲ್ಲಾ ಯಾಕೆ? 

2 Min read
Author : Pavna Das
| Updated : Jul 25 2025, 12:27 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : social media

ಕನ್ನಡ ಚಿತ್ರರಂಗದಲ್ಲಿ  (Kannada film industry)ಸಿನಿಮಾಗಳು ಬರುತ್ತಿವೆ. ಆದ್ರೆ ಯಾರು ಕನ್ನಡ ಸಿನಿಮಾ ನೋಡ್ತಿಲ್ಲ ಅನ್ನೋ ಗೋಳು ಮಾತ್ರ ಜಾಸ್ತಿಯಾಗುತ್ತಿವೆ. ಇದಕ್ಕೆ ಕಾರಣ ಹಲವಾರು. ಒಂದು ಕಡೆ ಸ್ಟಾರ್ ನಟರುಗಳು ಎರಡೋ, ಮೂರು ವರ್ಷಗಳಿಗೊಮ್ಮೆ ಸಿನಿಮಾ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಜನ ಇತ್ತೀಚಿನ ದಿನಗಳಲ್ಲಿ ಕಂಟೆಂಟ್ ಗೆ ಪ್ರಾಮುಖ್ಯತೆ ನೀಡುತ್ತಿದ್ದಾರೆ.

27
Image Credit : social media

ನಮ್ಮ ಕರುನಾಡಿನಲ್ಲಿ ದೇಸಿ ಸೊಗಡಿನ ಹಲವು ಕಥೆಗಳಿವೆ. ಆದರೆ ನಮ್ಮ ನಿರ್ದೇಶಕರು, ನಿರ್ಮಾಪಕರು ಮಾತ್ರ ಮಣ್ಣಿನ ಕಥೆ ಬಿಟ್ಟು ರೌಡಿಸಂ, ಫೈಟು, ದರೋಡೆ ಎನ್ನುತ್ತಾ ಹೀರೋಯಿಸಂ ಬಿಂಬಿಸುವ ಕಥೆಗಳನ್ನೇ ಕೈಗೆತ್ತಿಕೊಳ್ಳುತ್ತಿದ್ದಾರೆ. ಇದರ ಮಧ್ಯೆ ದೇಸಿ ಕಥೆಗಳು ಮಾತ್ರ ಪರ ಭಾಷೆಯ ಪಾಲಾಗುತ್ತಿವೆ.

Related Articles

Related image1
Sandalwood Queen Ramya: ನನಗೆ ಸೀಕ್ರೇಟ್​ ಆಗಿ ಮದುವೆಯಾಗಿ, ಮಕ್ಕಳೂ ಇವೆ... ನೋವಿನಿಂದ ನಟಿ ರಮ್ಯಾ ಹೇಳಿದ್ದೇನು?
Related image2
Now Playing
ವಿಷ್ಣುಪ್ರಿಯಾ ನೈಜ ಘಟನೆ ಆಧಾರಿತ ಸಿನಿಮಾ #vishnupriya #sandalwood #shorts #suvarnanews
37
Image Credit : social media

ಡಾ. ರಾಜಕುಮಾರ್ ಕಾಲದಲ್ಲಿ ಅದೆಷ್ಟೋ ಕನ್ನಡ ನಾಡಿನ ವೀರರ ಕಥೆಗಳು ತೆರೆ ಮೇಲೆ ಅಬ್ಬರಿಸಿದ್ದವು, ಯಶಸ್ಸು ಕೂಡ ಕಂಡಿತ್ತು. ಆದರೆ ಈಗ ನಮ್ಮ ವೀರರ ಎಷ್ಟು ಕಥೆಗಳು ಬಂದಿವೆ, ಬೆರಳೆಣಿಕೆಯಷ್ಟೇ ಇರಬಹುದು. ಆದರೆ ಪರ ಭಾಷೆಯಲ್ಲಿ ನಮ್ಮ ನಾಡಿನ ವೀರರ ಕಥೆಗಳು ಬಿಡುಗಡೆಯಾಗಿ ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆದದ್ದಂತೂ ನಿಜಾ.

47
Image Credit : social media

ಕ್ಯಾಪ್ಟನ್ ಗೋಪಿನಾಥ್  (Captain Gopinath) ಕರ್ನಾಟಕದವರೇ ಅಲ್ವಾ? ಎಂಥಾ ಪ್ರೇರಣೆ ನೀಡುವ ಕಥೆ ಅವರದ್ದು. ಆದರೆ ಕರ್ನಾಟಕದಲ್ಲಿ ಯಾರಾದ್ರೂ ಅವರ ಸಿನಿಮಾ ಮಾಡಿದ್ರಾ? ಇಲ್ಲ ತಮಿಳು ನಿರ್ದೇಶಕರು ಸೂರ್ಯ ಅವರನ್ನು ನಾಯಕನನ್ನಾಗಿ ಮಾಡಿ ಕ್ಯಾಪ್ಟನ್ ಗೋಪಿನಾಥ್ ಅವರ ಕಥೆಯನ್ನು ಸಿನಿಮಾ ಮಾಡಿದ್ರು, ಆ ಸಿನಿಮಾ ಸೂಪರ್ ಹಿಟ್ ಆಗಿತ್ತು.

57
Image Credit : social media

ಇನ್ನು ಮಾನವ ಕಂಪ್ಯೂಟರ್ ಎಂದು ಖ್ಯಾತಿ ಪಡೆದ ಶಕುಂತಲಾ ದೇವಿ (Human Computer Shakuntala Devi) ಅವರು ಕೂಡ ನಮ್ಮ ಕನ್ನಡದವರೇ. ಅವರ ಬಗ್ಗೆ ಕರ್ನಾಟಕದಿಂದ ಯಾವ ಸಿನಿಮಾ ಕೂಡ ಬಂದಿಲ್ಲ, ಆದರೆ ಬಾಲಿವುಡ್ ಶಾಕುಂತಲಾ ದೇವಿ ಸಿನಿಮಾ ಮಾಡಿ, ವಿದ್ಯಾ ಬಾಲನ್ ಶಾಕುಂತಲ ದೇವಿಯಾಗಿ ಅಭಿನಯಿಸಿದ್ದರು. ಈ ಸಿನಿಮಾ ಕೂಡ ಬಾಕ್ಸ್ ಆಫೀಸ್ ನಲ್ಲಿ ಗೆದ್ದಿತ್ತು.

67
Image Credit : social media

ನಾಳೆ ಬಾ ಕರ್ನಾಟಕದ ಒಂದು ಹಾರರ್ ಸ್ಟೋರಿ (Horror Story). ಇದನ್ನು ಬಾಲಿವುಡ್ ನವರು ಸ್ತ್ರೀ ಕಲ್ ಆನಾ ಎನ್ನುವ ಟೈಟಲ್ ಕೊಟ್ಟು ಸಿನಿಮಾ ಮಾಡಿದರು. ಶ್ರದ್ಧಾ ಕಪೂರ್ ಮತ್ತು ರಾಜಕುಮಾರ್ ರಾವ್ ನಟಿಸಿರುವ ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು ನಿಜಾ.

77
Image Credit : social media

ಇದೀಗ ಶ್ರೀಕೃಷ್ಣಾದೇವರಾಯ (Shri KrishnaDevaraya)ಸಿನಿಮಾವನ್ನು ಅಶುತೋಷ್ ಗೋರಿಕರ್ ಅವರು ಬಾಲಿವುಡ್ ನಲ್ಲಿ ಮಾಡಲಿದ್ದಾರೆ. ಈ ಸಿನಿಮಾಕ್ಕೆ ರಿಷಭ್ ಶೆಟ್ಟಿಯವರನ್ನು ಆಯ್ಕೆ ಮಾಡಿಕೊಂಡಿರೋದೇನೋ ನಿಜಾ. ಆದರೆ ಅದು ಕನ್ನಡ ಸಿನಿಮಾ ಆಗಲ್ಲ ಅಲ್ವ? ಈ ಹಿಂದೆ ಡಾ. ರಾಜಕುಮಾರ್ ಈ ಸಿನಿಮಾ ಮಾಡಿ ಗೆದ್ದಿದ್ದರು. ಆದರೆ ಇನ್ನೊಂದು ಸಲ ಹೊಸದಾಗಿ ಈ ಸಿನಿಮಾವನ್ನು ಕನ್ನಡಿಗರೇ ಮಾಡಿದ್ರೆ ಚೆನ್ನಾಗಿರುತ್ತಿತ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಸ್ಯಾಂಡಲ್‌ವುಡ್
ಸ್ಯಾಂಡಲ್ವುಡ್ ಫಿಲ್ಮ್

Latest Videos
Recommended Stories
Recommended image1
Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?
Recommended image2
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
Recommended image3
'ಧಂ' ಬೇಕಲೇ ಎಂದಿದ್ದ ದರ್ಶನ್‌ಗೆ ಟಾಂಗ್ ಕೊಟ್ರಾ ಸುದೀಪ್? ಏನಿದು ಮಾರ್ಕ್ ಡೈಲಾಗ್ ಮರ್ಮ?
Related Stories
Recommended image1
Sandalwood Queen Ramya: ನನಗೆ ಸೀಕ್ರೇಟ್​ ಆಗಿ ಮದುವೆಯಾಗಿ, ಮಕ್ಕಳೂ ಇವೆ... ನೋವಿನಿಂದ ನಟಿ ರಮ್ಯಾ ಹೇಳಿದ್ದೇನು?
Recommended image2
Now Playing
ವಿಷ್ಣುಪ್ರಿಯಾ ನೈಜ ಘಟನೆ ಆಧಾರಿತ ಸಿನಿಮಾ #vishnupriya #sandalwood #shorts #suvarnanews
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved