ಬೆಂಗಳೂರು, ಮೈಸೂರಲ್ಲಿ ಭಾನುವಾರ ಮಳೆ ಬರುತ್ತಾ? ಹವಾಮಾನ ಇಲಾಖೆ ಮುನ್ಸೂಚನೆ ಏನಿದೆ?
ಕರ್ನಾಟಕದಲ್ಲಿ ಇವತ್ತು ಭಾನುವಾರ ಬಿಸಿಲು ಜಾಸ್ತಿ ಇರುತ್ತದೆ. ದಕ್ಷಿಣ ಒಳನಾಡಿನ ಬೆಂಗಳೂರು ಹಾಗೂ ಕರಾವಳಿಯ ಮಂಗಳೂರಿನ ಕೆಲವು ಕಡೆ ಮಳೆ ಬರಬಹುದು. ಗುಡುಗು-ಸಿಡಿಲು ಜೊತೆಗೆ ಮಳೆ ಬರುವ ಸಾಧ್ಯತೆ ಇದೆ.

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಭಾನುವಾರ ಬಿಸಿಲು ವಾತಾವರಣವಿರುತ್ತದೆ. ಇನ್ನು ಕರಾವಳಿ ಸೇರಿದಂತೆ ಕೆಲವು ಸೀಮಿತ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಗುಡುಗು-ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಬೇಸಿಗೆಯಲ್ಲಿ ದೇಹ ನಿರ್ಜಲೀಕರಣ ಆಗಲಿದ್ದು, ಜನರು ಹೆಚ್ಚಾಗಿ ನೀರು ಕುಡಿಯಬೇಕು. ಸಂಜೆ ಮಳೆ ಬರುವ ವಾತಾವರಣ ಇದ್ದಾಗ ಎಚ್ಚರವಹಿಸಬೇಕು.
ಬೆಂಗಳೂರು: ಗರಿಷ್ಠ ಉಷ್ಣತೆ: 33°C, ಕನಿಷ್ಠ ಉಷ್ಣತೆ: 22°C, ರಿಯಲ್ ಫೀಲ್: 36°C ಇದೆ.
ಬೆಂಗಳೂರಿನಲ್ಲಿ ಬೆಳಗ್ಗೆಯೇ ಕೆಲವೆಡೆ ತಂಪಾದ ಮತ್ತು ಮೋಡ ಕವಿದ ವಾತಾವರಣವಿದ್ದು, ನಂತರ ಬಿಸಿಲಿನ ಝಳ ಝಳಪಿಸಿದೆ. ಮಧ್ಯಾಹ್ನದ ನಂತರ ನಗರದ ವಿವಿಧೆಡೆ ಮಳೆ ಬರಬಹುದು.
ಮೈಸೂರು:
ಗರಿಷ್ಠ ಉಷ್ಣತೆ: 35°C
ಕನಿಷ್ಠ ಉಷ್ಣತೆ: 22°C,
ಯಲ್ ಫೀಲ್: 38°C.
ಬಿಸಿಲು, ಮೋಡ ಇರುತ್ತದೆ, ಮಳೆ ಇಲ್ಲ.
ಹುಬ್ಬಳ್ಳಿ-ಧಾರವಾಡ:
ಗರಿಷ್ಠ ಉಷ್ಣತೆ: 36°C,
ಕನಿಷ್ಠ ಉಷ್ಣತೆ: 23°C,
ರಿಯಲ್ ಫೀಲ್: 37°C.
ಬಿಸಿಲು, ಮೋಡ ಇರುತ್ತೆ, ಮಳೆ ಇಲ್ಲ.
ಮಂಗಳೂರು:
ಗರಿಷ್ಠ ಉಷ್ಣತೆ: 32°C,
ಕನಿಷ್ಠ ಉಷ್ಣತೆ: 25°C,
ರಿಯಲ್ ಫೀಲ್: 38°C
ಬಿಸಿಲು, ಮೋಡ, ಸಂಜೆ ಮಳೆ ಬರಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ

