MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಅಂತೂ ಶಿವು ಅಮ್ಮನನ್ನ ನೋಡೋ ಕಾಲ ಕೂಡಿಬಂತು, ವೀರಭದ್ರನಿಗೆ ಮುಂದೆ ಐತೆ ಮಾರಿಹಬ್ಬ!

ಅಂತೂ ಶಿವು ಅಮ್ಮನನ್ನ ನೋಡೋ ಕಾಲ ಕೂಡಿಬಂತು, ವೀರಭದ್ರನಿಗೆ ಮುಂದೆ ಐತೆ ಮಾರಿಹಬ್ಬ!

Shiva mother reunion: ಶಿವು ಮತ್ತು ಅವರ ಅಮ್ಮ ಒಂದಾಗಬೇಕೆಂಬುದು ವೀಕ್ಷಕರ ಬಹುದಿನದ ಬಹುದೊಡ್ಡ ಆಸೆ. ಅದೀಗ ಈಡೇರುವ ಸಮಯ ಕೊನೆಗೂ ಬಂದಿದೆ ಅನಿಸುತ್ತಿದೆ. ಧಾರಾವಾಹಿ ಪ್ರೊಮೊ ನೋಡಿದ ಪ್ರತಿಯೊಬ್ಬರು ಶಿವು, ಮಾದಪ್ಪಣ್ಣನಿಗೆ ಪ್ರಂಶಸಿಸುತ್ತಿದ್ದಾರೆ. ಯಾಕೆ ಅಂತೀರಾ?, ಮುಂದೆ ಓದಿ..

2 Min read
Author : Ashwini HR
Published : Sep 20 2025, 03:40 PM IST
Share this Photo Gallery
  • FB
  • TW
  • Linkdin
  • Whatsapp
16
ಹೆಸರು ಕೇಳಿದರೇನೇ ಕೆಂಡಾಮಂಡಲವಾಗುವ ಶಿವು
Image Credit : Instagram

ಹೆಸರು ಕೇಳಿದರೇನೇ ಕೆಂಡಾಮಂಡಲವಾಗುವ ಶಿವು

ಪ್ರತಿ ದಿನ 'ಅಣ್ಣಯ್ಯ' ಧಾರಾವಾಹಿ ವೀಕ್ಷಿಸುವವರಿಗೆ ಶಿವು ಮತ್ತು ಅವರ ಅಮ್ಮ ಒಂದಾಗಬೇಕು ಎಂಬುದೇ ಆಸೆ. ಆದರೆ ಅಣ್ಣಯ್ಯನಿಗೆ ಮಾವ ವೀರಭದ್ರನ ಮೇಲೆ ಅತಿಯಾದ ನಂಬಿಕೆ, ಗೌರವ. ಮಾವ ಹೇಳಿದ ಮಾತನ್ನೇ ನಂಬಿ ಅಮ್ಮನ ಬಗ್ಗೆ ಕೆಟ್ಟ ಅಭಿಪ್ರಾಯ ಹೊಂದಿರುವ ಶಿವು ಅಮ್ಮನ ಹೆಸರು ಕೇಳಿದರೇನೇ ಕೆಂಡಾಮಂಡಲವಾಗುತ್ತಾನೆ. ಹಾಗಾಗಿ ಅಮ್ಮನನ್ನು ನೋಡುವ ತವಕವಾಗಲೀ, ಹುಡುಕಾಡುವುದಾಗಲೀ ಮಾಡುತ್ತಿಲ್ಲ.

26
ಮಾಂಕಳಮ್ಮ ದೇವಿ ನೀಡಿದ ಸೂಚನೆ
Image Credit : Instagram

ಮಾಂಕಳಮ್ಮ ದೇವಿ ನೀಡಿದ ಸೂಚನೆ

ಆದರೆ ಪಾರ್ವತಿ ಶಿವುನನ್ನು ಮದುವೆಯಾದ ಮೇಲೆ ಶಿವು ಅಮ್ಮ, ಅಂದರೆ ತನ್ನ ಅತ್ತೆ ಶಾರದಮ್ಮನ ಬಗ್ಗೆ ಒಂದೊಂದೇ ವಿಷಯ ತಿಳಿದುಕೊಳ್ಳುತ್ತಾ ಹೋಗುತ್ತಿದ್ದಾಳೆ. ಈ ಹಿಂದೆ ಮಾಂಕಳಮ್ಮ ದೇವಿ ಕೂಡ ಶಾರದಮ್ಮನ ಬಗ್ಗೆ ಸುಳಿವು ನೀಡಿತ್ತು. ಶಾರದಮ್ಮ ಕೂಡ ತಾನು ನಿನ್ನ ಅತ್ತೆ ಎಂದು ಹೇಳಿಕೊಳ್ಳದೆ ಪಾರ್ವತಿಗೆ ಒಳ್ಳೆಯದನ್ನೇ ಬಯಸುತ್ತಿದ್ದಾಳೆ.

Related Articles

Related image1
ಈ ಪುಟಾಣಿಯೇ ನಿಮ್ಮನೆಗೆ ಪ್ರತಿದಿನ ಬರ್ತಿರೋ 'ಅಣ್ಣಯ್ಯ' ಪಾರು! ಆ್ಯಂಕರಿಂಗ್​ ನೋಡಿ ಫ್ಯಾನ್ಸ್​ ಫಿದಾ...
Related image2
Annayya Serial Manu: ಅಣ್ಣಯ್ಯ ಧಾರಾವಾಹಿ ಪೆದ್ದ ಮನು ರಿಯಲ್‌ ಲೈಫ್‌ನಲ್ಲಿ ತುಂಬ ಬುದ್ಧಿವಂತ! ಶಿಕ್ಷಣ ಏನು?
36
ಪಾರ್ವತಿಗೆ ಗೊತ್ತಾಯ್ತು
Image Credit : Instagram

ಪಾರ್ವತಿಗೆ ಗೊತ್ತಾಯ್ತು

ಈಗ ಶಾರದಮ್ಮನನ್ನು ವೀರಭದ್ರ ತೋಟದ ಮನೆಯಲ್ಲಿ ಕೂಡಿಹಾಕಿರುವ ವಿಷಯ ಪಾರ್ವತಿಗೆ ತಿಳಿದಾಗಿದೆ. ಅದು ಶಿವು ತಾಯಿ ಎಂಬುದು ಪಾರ್ವತಿಗೆ ಸೀನನ ಅಪ್ಪ ಮಾದಪ್ಪನ ಮೂಲಕ ತಿಳಿದುಕೊಂಡಾಗಿದೆ. ಶಿವುಗೆ ನೇರವಾಗಿ ಈ ವಿಷಯವನ್ನ ಹೇಳದ ಪಾರ್ವತಿ, "ತೋಟದ ಮನೆಯಲ್ಲಿ ಒಬ್ಬರನ್ನೂ ಕೂಡಿಹಾಕಲಾಗಿದೆ, ಅವರನ್ನ ಬಿಡಿಸಬೇಕು. ಅಲ್ಲಿ ತುಂಬಾ ಜನರನ್ನು ಕಾವಲಿಡಲಾಗಿದೆ" ಎಂದು ಹೇಳಿದ್ದಾಳೆ.

46
ಶಿಫ್ಟ್ ಮಾಡುವಂತೆ ಹೇಳಿದ ವೀರಭದ್ರ
Image Credit : Instagram

ಶಿಫ್ಟ್ ಮಾಡುವಂತೆ ಹೇಳಿದ ವೀರಭದ್ರ

ಪಾರ್ವತಿಯ ಮಾತನ್ನ ಗಂಭೀರವಾಗಿ ತೆಗೆದುಕೊಂಡ ಶಿವು ಅವರನ್ನು ಅಲ್ಲಿಂದ ಬಿಡಿಸಬೇಕು ಎಂದು ಪಾರ್ವತಿ ಜೊತೆಗೆ ತೋಟದ ಮನೆಗೆ ಬಂದಿದ್ದಾನೆ. ತಾನಲ್ಲಿಗೆ ಬಂದಿರುವ ವಿಷಯವನ್ನು ಮಾವ ವೀರಭದ್ರನಿಗೂ ತಿಳಿಸುತ್ತಾನೆ. ಇದರಿಂದ ವೀರಭದ್ರನಿಗೆ ತಳಮಳ ಶುರುವಾಗಿದೆ. ಶಿವುಗೆ ಎಲ್ಲಿ ತನ್ನಮ್ಮ ಶಾರದಮ್ಮನ ಬಗ್ಗೆ ತಿಳಿಯುತ್ತದೆಯೋ ಎಂದು ಆತಂಕದಿಂದ ಅಲ್ಲಿದ್ದ ಅವರ ಕಡೆ ಹುಡುಗರಿಗೆ ಶಿವು ಅಮ್ಮನನ್ನು ಅಲ್ಲಿಂದ ಬೇಗನೇ ಶಿಫ್ಟ್ ಮಾಡುವಂತೆ ಹೇಳಿದ್ದಾನೆ.

56
ಅಮ್ಮನನ್ನು ನೋಡುವುದೊಂದೇ ಬಾಕಿ
Image Credit : Instagram

ಅಮ್ಮನನ್ನು ನೋಡುವುದೊಂದೇ ಬಾಕಿ

ಟ್ವಿಸ್ಟ್ ಇರುವುದೇ ಇಲ್ಲಿ. ಶಾರದಮ್ಮನ ಕಾವಲಿಗಿದ್ದ ರೌಡಿಗಳು ಶಾರದಮ್ಮನನ್ನು ಎಳೆದುಕೊಂಡು ಹೋಗುತ್ತಿರುವಾಗ ಅಲ್ಲಿಗೆ ಪಾರ್ವತಿ, ಶಿವು ಬರುತ್ತಾರೆ. ಆದರೆ ರೌಡಿಗಳು ಶಿವು ಅವರ ಅಮ್ಮನನ್ನು ನೋಡದಂತೆ ತಡೆಯುವ ವೇಳೆಗಾಗಲೇ ಸೀನನ ಅಪ್ಪ ಮಾದಪ್ಪ ಬರುತ್ತಾನೆ. ಪಾರ್ವತಿ-ಶಾರದಮ್ಮ ಮುಖಾಮುಖಿಯಾಗಿದ್ದಾರೆ. ಆದರೆ ಶಿವು ಈಗ ಅಮ್ಮನನ್ನು ನೋಡುವುದೊಂದೇ ಬಾಕಿ.

66
 ವೀಕ್ಷಕರಿಂದ ಮಿಶ್ರಪ್ರತಿಕ್ರಿಯೆ
Image Credit : Instagram

ವೀಕ್ಷಕರಿಂದ ಮಿಶ್ರಪ್ರತಿಕ್ರಿಯೆ

ಸದ್ಯ ವೀಕ್ಷಕರು ಈಗಲಾದರೂ ಶಿವು ಅವರ ಅಮ್ಮನನ್ನು ಭೇಟಿ ಮಾಡಲಿ. ಅವನಿಗೆ ಮತ್ತು ತಂಗಿಯರಿಗೆ ಅವರ ತಾಯಿ ಪ್ರೀತಿ ಸಿಗಲಿ. ವೀರಭದ್ರನ ಕುತಂತ್ರ ಬಯಲಾಗಲೀ ಎಂದು ಆಶಿಸುತ್ತಿದ್ದಾರೆ. ಮುಂದಿನ ಸಂಚಿಕೆ ನೋಡಿದರೆ ಬಹುಶಃ ಈ ಬಾರಿ ಶಿವುನನ್ನ ತಾಯಿ ಭೇಟಿಯಾಗಬಹುದು ಎಂದನಿಸುತ್ತದೆ. ವೀಕ್ಷಕರು ಕೂಡ ಈ ಬಗ್ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.

 
 
 
 
View this post on Instagram
 
 
 
 
 
 
 
 
 
 
 

A post shared by Zee Kannada (@zeekannada)

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಅಣ್ಣಯ್ಯ ಧಾರಾವಾಹಿ
ಮನರಂಜನಾ ಸುದ್ದಿ
ಟಿವಿ ಶೋ

Latest Videos
Recommended Stories
Recommended image1
ವೈವಾಹಿಕ ಜೀವನಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಹಿಂದೂ ಮುಸ್ಲಿಂ ಸಂಪ್ರದಾಯದಂತೆ ಮದುವೆ
Recommended image2
ಕಾಲುಂಗುರ ಧರಿಸಿದ ನಟಿ ರಜಿನಿ ಪತಿ…. ಪ್ರಶ್ನಿಸಿದವರಿಗೆ ಏನಂದ್ರು ನೋಡಿ
Recommended image3
BBK 12: ಮದುವೆ ಮನೆಯಿಂದ ಗಿಲ್ಲಿ ನಟನನ್ನು ಆಚೆ ಹಾಕಿ, ರಸ್ತೆಗೆ ನೂಕಿದ್ರು: ಗೊತ್ತಿಲ್ಲದ ವಿಷಯ ಬಿಚ್ಚಿಟ್ಟ ತಾಯಿ
Related Stories
Recommended image1
ಈ ಪುಟಾಣಿಯೇ ನಿಮ್ಮನೆಗೆ ಪ್ರತಿದಿನ ಬರ್ತಿರೋ 'ಅಣ್ಣಯ್ಯ' ಪಾರು! ಆ್ಯಂಕರಿಂಗ್​ ನೋಡಿ ಫ್ಯಾನ್ಸ್​ ಫಿದಾ...
Recommended image2
Annayya Serial Manu: ಅಣ್ಣಯ್ಯ ಧಾರಾವಾಹಿ ಪೆದ್ದ ಮನು ರಿಯಲ್‌ ಲೈಫ್‌ನಲ್ಲಿ ತುಂಬ ಬುದ್ಧಿವಂತ! ಶಿಕ್ಷಣ ಏನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved