ಪುಟ್ಟಕ್ಕನ ಮಕ್ಕಳು ಸೀರಿಯಲ್ ಮುಗಿಯುವ ಹಂತದಲ್ಲಿದ್ದು, ಕ್ಲೈಮ್ಯಾಕ್ಸ್ನಲ್ಲಿ ಹಲವು ಟ್ವಿಸ್ಟ್ಗಳಿವೆ. ಸ್ನೇಹಾ ಮತ್ತು ಕಂಠಿ ಮದುವೆಯಾಗಿದ್ದು, ರಾಧಾ ಜೈಲಿನಲ್ಲಿದ್ದಾಳೆ. ಆದರೆ, ಕಥೆಯನ್ನು ಮತ್ತಷ್ಟು ಎಳೆಯುವ ಸೂಚನೆಗಳಿವೆ.
ಸದ್ಯ ಪುಟ್ಟಕ್ಕನ ಮಕ್ಕಳು ಮುಗಿಯುವ ಹಂತದಲ್ಲಿದೆ. ವಿಲನ್ ಯಾರು ಎಂದು ತಿಳಿದಿದೆ. ಆ ಸ್ನೇಹಾಳ ಹಾರ್ಟ್ ಹಾಕಿದ್ದು ಈ ಸ್ನೇಹಾಳಿಗೆ ಎನ್ನುವ ವಿಷಯವೂ ಕಂಠಿ ಸೇರಿದಂತೆ ಎಲ್ಲರಿಗೂ ತಿಳಿದಿದೆ. ರಾಧಾ ಹೇಗಾದರೂ ಮಾಡಿ ಕಂಠಿಯನ್ನು ಮೋಸದಿಂದ ಮದುವೆಯಾಗಲು ಹೋಗಿದ್ದಳು. ಅವಳೂ ಪೊಲೀಸ್ ವಶಕ್ಕೆ ಸೇರಿದ್ದಾರೆ. ಸ್ನೇಹಾ ಮತ್ತು ಕಂಠಿಯ ಮದುವೆಯಾಗಿದ್ದು, ಮೊದಲ ರಾತ್ರಿಯೂ ಆಗಿದೆ. ಕಂಠಿ ಮತ್ತು ಸ್ನೇಹಾಳ ಮದುವೆಯಾದ ಮೇಲೆ ಕಂಠಿ ಸಿಟ್ಟುಮಾಡಿಕೊಂಡು ಮನೆಬಿಟ್ಟು ಹೋದ ಹಾಗೆ ತೋರಿಸಲಾಗಿತ್ತು. ಅಯ್ಯೋ ಸೀರಿಯಲ್ ಅನ್ನು ಮತ್ತಷ್ಟು ಎಳೆಯುತ್ತಾರಾ ಎಂದುಕೊಳ್ಳುವಾಗಲೇ ಇದಕ್ಕೆ ಸುಖಾಂತ್ಯವನ್ನೂ ಹಾಡಲಾಗಿದೆ.
ಸ್ನೇಹಾ ನಾಚಿಕೆ ಬಿಟ್ಟು ಫಸ್ಟ್ನೈಟ್ ಮಾಡಿದ್ರೆ ಎಲ್ಲಾ ಸರಿಯಾಗುತ್ತೆ ಎಂದಿದ್ದಾಳೆ. ಅದರಂತೆ ಮನೆಯವರು ಎಲ್ಲರೂ ಒಪ್ಪಿದ್ದಾರೆ. ಈ ಸಮಯದಲ್ಲಿಯೂ ಕಂಠಿ ಸ್ನೇಹಾಳ ಮೇಲೆ ಕೋಪ ತೋರಿದ್ದ. ಕೊನೆಗೆ ಅದು ಹುಸಿ ಮುನಿಸು ಎಂದು ತಿಳಿದಿದೆ. ಅಷ್ಟರಲ್ಲಿಯೇ ಜೈಲಿನಲ್ಲಿರೋ ರಾಧಾ ಕಂಠಿಯ ಕೊಲೆಗೆ ಸ್ಕೆಚ್ ಹಾಕಿದ್ದಾಳೆ. ಕಂಠಿಯನ್ನು ಮುಗಿಸಲು ರೌಡಿಗಳು ಬಂದಿದ್ದು, ಆತನನ್ನು ಹೊಡೆದಿದ್ದಾರೆ. ಸೀರಿಯಲ್ ಇನ್ನಷ್ಟು ಎಳೆಯುವ ಸೂಚನೆಗಳೂ ಇದರಲ್ಲಿ ಕಾಣುತ್ತಿದೆ. ಸೀರಿಯಲ್ ವಿಷಯ ಏನೇ ಇರಲಿ. ಇದರ ನಡುವೆಯೇ ಈ ಸೀರಿಯಲ್ನಲ್ಲಿ ಇರೋ ಯಾರ್ಯಾರೋ ಇನ್ನು ಯಾರರದ್ದೋ ಜೊತೆಯಲ್ಲಿ ಡಾನ್ಸ್ ಮಾಡ್ತಿರೋ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಪುಟ್ಟಕ್ಕನ ಚಿಕ್ಕ ಮಗಳು ಸುಮಾ, ಕಾಳಿ ಜೊತೆ, ರಾಧಾ ಕಂಠಿಯ ಫ್ರೆಂಡ್ ಜೊತೆ ಇರುವುದನ್ನು ನೋಡಬಹುದು.
ಅಷ್ಟಕ್ಕೂ ಇದು ಶೂಟಿಂಗ್ ವಿಡಿಯೋ ಆಗಿದೆ. ರಾಧಾ ಮತ್ತು ಕಂಠಿಯ ಮದುವೆಯ ಸಂದರ್ಭದಲ್ಲಿ ಏನಾಯಿತು, ಹೇಗೆ ಮದುವೆ ಶೂಟಿಂಗ್ ಮಾಡಲಾಯಿತು ಎನ್ನುವ ಬಗ್ಗೆ ಇದರಲ್ಲಿ ವಿವರಣೆ ನೀಡಲಾಗಿದೆ. ಶೂಟಿಂಗ್ ಬಳಿಕ ನಟ-ನಟಿಯರು ಸುಮ್ಮನೇ ರೀಲ್ಸ್ ಮಾಡಿದ್ದು, ಅದನ್ನು ಡಿವಿ ಡ್ರೀಮ್ಸ್ ಶೇರ್ ಮಾಡಿಕೊಂಡಿದೆ.
ಇನ್ನು ಸೀರಿಯಲ್ ವಿಷಯಕ್ಕೆ ಬರುವುದಾದರೆ, ಮೊದಲೇ ಹೇಳಿದಂತೆ ಸೀರಿಯಲ್ ಮುಗಿಯುವ ಹಂತದಲ್ಲಿದೆ. ಅದರೆ, ಸದ್ಯದ ಸ್ಥಿತಿ ಇದನ್ನು ಇನ್ನೂ ಎಳೆಯುವ ಲಕ್ಷಣಗಳೂ ಕಾಣಿಸ್ತಿವೆ. ಮೊದಲ ಸ್ನೇಹಾ ಸತ್ತು ಹೋದ ಸಮಯದಲ್ಲಿ ಪುಟ್ಟಕ್ಕನ ಮಕ್ಕಳು ಟಿಆರ್ಪಿ ಕಡಿಮೆಯಾಗುತ್ತಾ ಬಂದಿತ್ತು. ಅಪಘಾತ ಮಾಡಿಸಿ ಸ್ನೇಹಾಳನ್ನು ಸಾಯಿಸಲಾಯಿತು. ಪುಟ್ಟಕ್ಕ ಒಂಟಿಯಾದ ತನ್ನ ಮಕ್ಕಳನ್ನು ಹೇಗೆ ಬೆಳೆಸಿದಳು, ಆ ಪೈಕಿ ಸ್ನೇಹಾ ಹೇಗೆ ಎಲ್ಲ ಸಮಸ್ಯೆಗಳನ್ನೂ ಹಿಮ್ಮೆಟ್ಟಿ ಜಿಲ್ಲಾಧಿಕಾರಿಯಾದಳು ಎಂದು ತೋರಿಸಿ ಇಂಥ ಹೆಣ್ಣುಮಕ್ಕಳಿಗೆ ಮಾದರಿಯಾಗುವ ಹೊತ್ತಿನಲ್ಲಿಯೇ, ಕೊನೆಯಲ್ಲಿ ಸ್ವಲ್ಪ ತರಾತುರಿ ಮಾಡಿ ಏಕಾಏಕಿ ಸ್ನೇಹಾಳನ್ನು ಸಾಯಿಸಿದ್ದು ಏಕೆ ಎನ್ನುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಇಡೀ ಸೀರಿಯಲ್ನ ಉದ್ದೇಶವನ್ನೇ ನಿರ್ದೇಶಕರು ಬುಡಮೇಲು ಮಾಡಿದರು ಎನ್ನುವ ಮಾತೂ ಸಾಕಷ್ಟು ಕೇಳಿ ಬಂದಿತ್ತು. ಅನಿವಾರ್ಯವಾಗಿ ನಾನು ಸೀರಿಯಲ್ ಸೆಟ್ನಿಂದ ಹೊರಕ್ಕೆ ಹೋಗಬೇಕಾಯಿತು. ಇದು ನನ್ನ ವೈಯಕ್ತಿಕ ಕಾರಣ ಎನ್ನುವ ಮೂಲಕ ಉದ್ದೇಶಪೂರ್ವಕವಾಗಿ ಸ್ನೇಹಾಳನ್ನು ಸಾಯಿಸುವ ಸೀನ್ ಮಾಡಬೇಕಾಯಿತು, ಕಥೆಯನ್ನು ಬದಲಿಸಬೇಕಾಯಿತು ಎಂದೆಲ್ಲಾ ಹೇಳಿದ್ದರು. ಕೊನೆಯ ಬಂದ ಸ್ನೇಹಾಳನ್ನೂ ತೆಗೆದು ಆ ಜಾಗಕ್ಕೆ ಮತ್ತೊಬ್ಬ ಸ್ನೇಹಾಳನ್ನು ತಂದರು. ಒಟ್ಟಿನಲ್ಲಿ ಸೀರಿಯಲ್ ಸಾಕು, ಮುಗಿಸಿ ಎನ್ನುತ್ತಿದ್ದಾರೆ ವೀಕ್ಷಕರು.



