MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಕುಡಿದ ಮತ್ತಿನಲ್ಲಿ ಪೊಲೀಸಪ್ಪನ ಅವಾಂತರಕ್ಕೆ 24ರ ಯುವತಿ ದುರಂತ ಸಾವು

ಕುಡಿದ ಮತ್ತಿನಲ್ಲಿ ಪೊಲೀಸಪ್ಪನ ಅವಾಂತರಕ್ಕೆ 24ರ ಯುವತಿ ದುರಂತ ಸಾವು

ಕುಡಿದ ಮತ್ತಿನಲ್ಲಿ ಪೊಲೀಸಪ್ಪನ ಅವಾಂತರಕ್ಕೆ 24ರ ಯುವತಿ ದುರಂತ ಸಾವು ಕಂಡಿದ್ದಾಳೆ. ಪೊಲೀಸ್ ಎಂದು ಕಂಠಪೂರ್ತಿ ಕುಡಿದಿದ್ದಾನೆ. ಆದರೆ ಈತನ ಆಟಾಟೋಪಕ್ಕೆ ಯುವತಿ ಸ್ಥಳದಲ್ಲೆ ಮೃತಪಟ್ಟಿದ್ದಾಳೆ. 

1 Min read
Author : Chethan Kumar
Published : Feb 12 2026, 05:31 PM IST
Share this Photo Gallery
  • FB
  • TW
  • Linkdin
  • Whatsapp
15
ಮನೆಗೆ ಮರಳುತ್ತಿದ್ದ ಯುವತಿ ದುರಂತ ಸಾವು
Image Credit : X

ಮನೆಗೆ ಮರಳುತ್ತಿದ್ದ ಯುವತಿ ದುರಂತ ಸಾವು

ಕೆಲ ಮುಗಿಸಿ ಮನೆಗೆ ಮರಳುತ್ತಿದ್ದ 24ರ ಹರೆಯದ ಯುವತಿ ನಿಕಿತಾ ರಸ್ತೆಯಲ್ಲೇ ದುರಂತ ಸಾವು ಕಂಡಿದ್ದಾಳೆ. ಈ ಸಾವು ಅಚಾನಕ್ಕಾಗಿ, ಆಕಸ್ಮಿಕವಾಗಿ ಸಂಭವಿಸಿದ್ದಲ್ಲ, ಪೊಲೀಸಪ್ಪನ ಅವಾಂತರಕ್ಕೆ ಅಮಾಯಕ ಯುವತಿ ಬಲಿಯಾದ ಘಟನೆ ಹರ್ಯಾಣದಲ್ಲಿ ನಡೆದಿದೆ. ದೆಹಲಿಯಿಂದ ಹರ್ಯಾಣಕ್ಕೆ ಮರಳುತ್ತಿದ್ದ ಯುವತಿ ಪೊಲೀಸ್ ಉದ್ಧಟತನಕ್ಕೆ ಬಲಿಯಾಗಿದ್ದಾಳೆ.

25
ಯುವತಿ ಸಾವು ಕಂಡಿದ್ದು ಹೇಗೆ
Image Credit : X

ಯುವತಿ ಸಾವು ಕಂಡಿದ್ದು ಹೇಗೆ

ಗುರುಗಾಂವನಲ್ಲಿ ಕೆಲಸ ಮಾಡುತ್ತಿರುವ ನಿಕಿತ ಕೆಲಸ ಮುಗಿಸಿ ಅಂಬಾಲಾಗೆ ಮರಳಿದ್ದಾಳೆ. ಅಂಬಾಲದಿಂದ ಮನೆಗೆ ತೆರಳಲು ಇ ರಿಕ್ಷಾ ಮೂಲಕ ತೆರಳಿದ್ದಾಳೆ. ಇ ರಿಕ್ಷಾ ಮೂಲಕ ತೆರಳುತ್ತಿದ್ದ ವೇಳೆ ಕಂಠಪೂರ್ತಿ ಕುಡಿದ ಪೊಲೀಸ್ ಅಧಿಕಾರಿ ಅಡ್ಡಾದಿಡ್ಡಿ ಕಾರು ಚಲಾಯಿಸಿಕೊಂಡು ಬಂದು ಇ ರಿಕ್ಷಾಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯಾದ ರಭಸಕ್ಕೆ ಇ ರಿಕ್ಷಾದಲ್ಲಿದ್ದ ನಿಕಿತಾ ನೆಲಕ್ಕೆ ಬಿದ್ದಿದ್ದಾಳೆ. ಈಕೆಯ ಮೇಲಿಂದ ಪೊಲೀಸಪ್ಪನ ಕಾರು ಹರಿದಿದೆ. ಪರಿಣಾಮ ಸ್ಥಳದಲ್ಲೇ ನಿಕಿತಾ ಮೃತಪಟ್ಟಿದ್ದಾಳೆ.

Related Articles

Related image1
ಹಳೇ ಸಿನಿಮಾ ಹಾಡು, ಸಿಗರೇಟು; ನಾಪತ್ತೆಯಾಗಿದ್ದ ಪತ್ರಕರ್ತೆ ಸಲ್ಮಾ ಕೊಲೆ ಹಿಂದಿನ ಸತ್ಯ ಬಯಲು
Related image2
ಸ್ಕೂಲ್ ಬಸ್ ಹರಿದು ಇಬ್ಬರು ಮಕ್ಕಳು ದಾರುಣ ಸಾವು; ಅಪ್ಪ ಹಾಲು ತರಲು ಮಕ್ಕಳ ಕರೆದೊಯ್ದರೆ, ರಕ್ತದ ಹೊಳೆ ಹರಿಯಿತು!
35
ಪೊಲೀಸಪ್ಪನ ಹಿಡಿದ ಸ್ಥಳೀಯರು
Image Credit : X

ಪೊಲೀಸಪ್ಪನ ಹಿಡಿದ ಸ್ಥಳೀಯರು

ಅಂಬಾಲಾ ಸೇತುವೆ ಬಳಿ ಘಟನೆ ನಡೆದಿದೆ. ಸ್ಥಳದಿಂದ ಎಸ್ಕೇಪ್ ಆಗಲು ಪೊಲೀಸಪ್ಪ ಯತ್ನಿಸಿದ್ದಾನೆ. ಆದರೆ ಪೊಲೀಸರು ಪೊಲೀಸ್ ಹಿಡಿದಿದ್ದಾರೆ. ಇತ್ತ ನಿಖಿತಾಳನ್ನು ಸ್ಥಳೀಯರು ಸಿಟಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಇತ್ತ ಪೋಷಕರು ಆಸ್ಪತ್ರೆಗೆ ದೌಡಾಯಿಸಿದ್ದಾರೆ.

45
ಇ ರಿಕ್ಷಾ ಚಾಲಕನ ಹೇಳಿಕೆ ದಾಖಲು
Image Credit : X

ಇ ರಿಕ್ಷಾ ಚಾಲಕನ ಹೇಳಿಕೆ ದಾಖಲು

ಘಟನೆ ಸಂಬಂಧ ಇ ರಿಕ್ಷಾ ಚಾಲಕನ ಹೇಳಿಕೆ ದಾಖಲಿಸಲಾಗಿದೆ. ನಾಲ್ವರು ಪ್ರಯಾಣಿಕರು ಇ ರಿಕ್ಷಾದಲ್ಲಿದ್ದರು. ಈ ಪೈಕಿ ಮೃತಪಟ್ಟ ಯುವತಿ ಬದಿಯಲ್ಲಿ ಕುಳಿತಿದ್ದರು. ವೇಗವಾಗಿ ಬಂದ ಕಾರು ಇ ರಿಕ್ಷಾಗೆ ಡಿಕ್ಕಿಯಾಗಿದೆ. ಪರಿಣಾಮ ಯುವತಿ ಕೆಳಕ್ಕೆ ಬಿದ್ದಿದ್ದಾಳೆ. ತಕ್ಷಣವೇ ಕಾರು ನಿಲ್ಲಿಸಿದರೂ ಅಪಾಯದ ಪ್ರಮಾಣ ಕಡಿಮೆಯಾಗುತ್ತಿತ್ತು. ಆದರೆ ಪೊಲೀಸ್ ಡಿಕ್ಕಿಯಾದ ಬಳಿಕ ವೇಗ ಹೆಚ್ಚಿಸಿದ್ದಾರೆ. ಪರಿಣಾಮ ಕಾರು ಯುವತಿ ಮೇಲಿಂದ ಹರಿದಿದೆ ಎಂದು ಇ ರಿಕ್ಷಾ ಚಾಲಕ ಹೇಳಿದ್ದಾರೆ.

55
ಆಸ್ಪತ್ರೆಯಲ್ಲಿ ಪೋಷಕರ ಆಕ್ರಂದನ
Image Credit : X

ಆಸ್ಪತ್ರೆಯಲ್ಲಿ ಪೋಷಕರ ಆಕ್ರಂದನ

ಆಸ್ಪತ್ರೆಗೆ ದೌಡಾಯಿಸಿದ ಪೋಷಕರು ಮಗಳ ಕಳೆದುಕೊಂಡ ನೋವಿನಲ್ಲಿ ಕಣ್ಣೀರಿಟ್ಟಿದ್ದಾರೆ. ಇತ್ತ ಕುಟುಂಬಸ್ಥರು ಆಪ್ತರು ಆಗಮಿಸಿ ಭಾರಿ ಪ್ರತಿಭಟನೆ ನಡೆಸಿದ್ದಾರೆ. ಪೊಲೀಸ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಆಸ್ಪತ್ರೆ ಮುಂಭಾಗ ಭಾರಿ ಹೈಡ್ರಾಮವೇ ನಡೆದಿದೆ. ಇತ್ತ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಭದ್ರತೆ ಒದಗಿಸಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಪೊಲೀಸ್
ಹರಿಯಾಣ
ಭಾರತ ಸುದ್ದಿ

Latest Videos
Recommended Stories
Recommended image1
ಸಿನಿಮಾ ಮೀರಿಸುವ ರೋಚಕ ಕ್ರೈಂ ಥ್ರಿಲ್ಲರ್ ಸ್ಟೋರಿ ಇದು: ಕೊಲೆಯಾದ ಪತ್ನಿಯ ರಹಸ್ಯ ಬಯಲು ಮಾಡಿದ ಆಧಾರ್ ಕಾರ್ಡ್ ಒಟಿಪಿ
Recommended image2
ಹಳೇ ಸಿನಿಮಾ ಹಾಡು, ಸಿಗರೇಟು; ನಾಪತ್ತೆಯಾಗಿದ್ದ ಪತ್ರಕರ್ತೆ ಸಲ್ಮಾ ಕೊಲೆ ಹಿಂದಿನ ಸತ್ಯ ಬಯಲು
Recommended image3
ಅಮೆರಿಕಾ: ಅಪಘಾತದಲ್ಲಿ ಸಾವನ್ನಪ್ಪಿದ ಭಾರತೀಯ ವಿದ್ಯಾರ್ಥಿಯ ಕುಟುಂಬಕ್ಕೆ 260 ಕೋಟಿ ಪರಿಹಾರ
Related Stories
Recommended image1
ಹಳೇ ಸಿನಿಮಾ ಹಾಡು, ಸಿಗರೇಟು; ನಾಪತ್ತೆಯಾಗಿದ್ದ ಪತ್ರಕರ್ತೆ ಸಲ್ಮಾ ಕೊಲೆ ಹಿಂದಿನ ಸತ್ಯ ಬಯಲು
Recommended image2
ಸ್ಕೂಲ್ ಬಸ್ ಹರಿದು ಇಬ್ಬರು ಮಕ್ಕಳು ದಾರುಣ ಸಾವು; ಅಪ್ಪ ಹಾಲು ತರಲು ಮಕ್ಕಳ ಕರೆದೊಯ್ದರೆ, ರಕ್ತದ ಹೊಳೆ ಹರಿಯಿತು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved