- Home
- Entertainment
- Sandalwood
- ಮರೀಬೇಡಿ, ಬೆಳಿಗ್ಗೆ ಹೋದಾಗ ಬೇಕಾಗೋದು ಎಡಗೈನೇ: ಕಿಚ್ಚ ಸುದೀಪ್ ಉತ್ತರ ಕೇಳಿ ಇದ್ದವರು ಸುಸ್ತು
ಮರೀಬೇಡಿ, ಬೆಳಿಗ್ಗೆ ಹೋದಾಗ ಬೇಕಾಗೋದು ಎಡಗೈನೇ: ಕಿಚ್ಚ ಸುದೀಪ್ ಉತ್ತರ ಕೇಳಿ ಇದ್ದವರು ಸುಸ್ತು
ಕೆಡಿ ಚಿತ್ರದ ಪ್ರಮೋಷನ್ ವೇಳೆ ಪತ್ರಕರ್ತರ ಪ್ರಶ್ನೆಗಳಿಗೆ ನಟ ಸುದೀಪ್ ತಮ್ಮದೇ ಶೈಲಿಯಲ್ಲಿ ಚಟಾಕಿ ಹಾರಿಸಿ ಉತ್ತರಿಸಿದ್ದಾರೆ. ಪ್ರೇಮ್ ಮತ್ತು ಧ್ರುವ ಸರ್ಜಾರಲ್ಲಿ ಯಾರು ಇಷ್ಟ ಎಂಬ ಪ್ರಶ್ನೆಗೆ ಜಾಣ್ಮೆಯ ಉತ್ತರ ನೀಡಿದ ಅವರು, 'ನನ್ನನ್ನು ಮುಗಿಸಲು ಆಗಲ್ಲ' ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದರು.

ಕೆಡಿ ಚಿತ್ರ ತೆರೆಗೆ
KD ಚಿತ್ರ ಇದಾಗಲೇ ಸೆರಗ ಸರ್ಸೆ ಹಾಡಿನಿಂದಾಗಿ ಟ್ರೋಲ್ ಆಗುವ ಜೊತೆಗೆ ಫೇಮಸ್ ಕೂಡ ಆಗಿದೆ. ಜೋಗಿ ಪ್ರೇಮ್ ನಿರ್ದೇಶನದ ಈ ಚಿತ್ರ ಇದೇ 30 ರಂದು ಬಿಡುಗಡೆಯಾಗಲಿದೆ. ಇದರಲ್ಲಿ ಸುದೀಪ್ ಅವರು 'ಕಾಲ ಭೈರವ' ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕೆಡಿ ಚಿತ್ರದ ಪ್ರಮೋಷನ್
ಕೆಡಿ ಚಿತ್ರದ ಪ್ರಮೋಷನ್ ವೇಳೆ ಸುದೀಪ್ ಅವರಿಗೆ ಪತ್ರಕರ್ತರು ಕೆಲವೊಂದು ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ಸುದೀಪ್ ಎಂದಿನಂತೆ ತಮಾಷೆಯಾಗಿ ಉತ್ತರಿಸಿದರು. ಪತ್ರಕರ್ತೆ ಒಬ್ಬರು, ನಿಮಗೆ ಪ್ರೇಮ್ ಸರ್ ಡಾರ್ಲಿಂಗ್ ಎನ್ನುತ್ತಾರೆ, ಧ್ರುವ ಸರ್ಜಾ ಬ್ರದರ್ ಅಂತಾರೆ. ನಿಮಗೆ ಇವರಲ್ಲಿ ಯಾರು ಇಷ್ಟ ಎಂದು ಪ್ರಶ್ನಿಸಿದರು.
ಹೆಂಡತಿನೋ, ಮಗಳೋ
ಅದಕ್ಕೆ ಸುದೀಪ್, ನಿಮ್ಮದೊಳ್ಳೆ ಪ್ರಶ್ನೆಯಾಯಿತು. ಹೆಂಡ್ತಿ ಇಷ್ಟನೋ, ಮಗಳು ಇಷ್ಟನೋ ಒಂದನ್ನು ಆಯ್ಕೆ ಮಾಡಿ ಅಂದ್ರೆ ನಾನು ಯಾರನ್ನು ಆಯ್ಕೆ ಮಾಡಲಿ, ಮನೆಗೆ ಹೋಗಬೇಕೋ ಬೇಡ್ವೋ ಎಂದು ಪ್ರಶ್ನಿಸಿದರು.
ಬೆಳಿಗ್ಗೆ ಎಡಗೈ ಬೇಕು
ಎಡಗೈ ಬೇಕೋ, ಬಲಗೈ ಬೇಕೋ ಒಂದನ್ನು ಆಯ್ಕೆ ಮಾಡಿ ಎಂದ ಹಾಗಾಯ್ತು ನಿಮ್ಮ ಪ್ರಶ್ನೆ. ನೆನಪಿರಲಿ. ಬೆಳಿಗ್ಗೆ ಹೋದಾಗ ಬೇಕಾಗೋದು ಎಡಗೈನೇ ಎಂದು ಚಟಾಕಿ ಹಾರಿಸಿದರು.
ನನ್ನನ್ನು ಮುಗಿಸಲು ಆಗಲ್ಲ
ಇದೇ ವೇಳೆ ಸರ್, ಒಂದೇ ಒಂದು ಲಾಸ್ಟ್ ಪ್ರಶ್ನೆ, ಮುಗಿಸಿಬಿಡ್ತೀನಿ ಎಂದಾಗ ಸುದೀಪ್ ಅವರು, ಯಾರನ್ನು ಮುಗಿಸುತ್ತೀರಿ, ಕನಸಿನಲ್ಲೂ ಅನ್ಕೋಬೇಡಿ ನನ್ನನ್ನ ಮುಗಿಸ್ತೀನಿ ಅಂತ, ಅದೆಲ್ಲಾ ಆಗಲ್ಲ ಎಂದರು.
ಕೆಡಿ ಸಿನಿಮಾದ ಕುರಿತು
ಇನ್ನು ಕೆಡಿ ಸಿನಿಮಾದ ಕುರಿತು ಹೇಳುವುದಾದರೆ, ಇದು ಜೋಗಿ ಪ್ರೇಮ್ ನಿರ್ದೇಶದ್ದು, ಧ್ರುವ ಸರ್ಜಾ ನಾಯಕರಾಗಿದ್ದಾರೆ. ಇದು 1970ರ ದಶಕದ ಬೆಂಗಳೂರಿನ ಭೂಗತ ಲೋಕದ ಕಥೆಯನ್ನು ಆಧರಿಸಿದೆ. ಇದರಲ್ಲಿ ಸುದೀಪ್ ಅವರ ಪಾತ್ರ ಕಥೆಗೆ ಪ್ರಮುಖ ತಿರುವು ನೀಡುವ ಪಾತ್ರ ಎನ್ನಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

