MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • 'Dr Rajkumar​ ಸಾಕ್ಷಾತ್​ ದೇವರು' ಎನ್ನುತ್ತಲೇ ಸಾವಿನ ಹಾದಿಯಲ್ಲಿದ್ದಾಗ ಪ್ರಾರ್ಥನೆ ಮಾಡಿದ್ದನ್ನು ನೆನಪಿಸಿದ ಅಮಿತಾಭ್

'Dr Rajkumar​ ಸಾಕ್ಷಾತ್​ ದೇವರು' ಎನ್ನುತ್ತಲೇ ಸಾವಿನ ಹಾದಿಯಲ್ಲಿದ್ದಾಗ ಪ್ರಾರ್ಥನೆ ಮಾಡಿದ್ದನ್ನು ನೆನಪಿಸಿದ ಅಮಿತಾಭ್

ಕೌನ್​ ಬನೇಗಾ ಕರೋಡ್​ಪತಿ ಕಾರ್ಯಕ್ರಮದಲ್ಲಿ ಬಾಲಿವುಡ್​ ನಟ ಅಮಿತಾಭ್ ಬಚ್ಚನ್, ಡಾ.ರಾಜ್​ಕುಮಾರ್ ಅವರನ್ನು 'ಕನ್ನಡದ ದೇವರು' ಎಂದು ಬಣ್ಣಿಸಿದ್ದಾರೆ. ರಾಜ್‌ಕುಮಾರ್ ಅವರ ಸರಳ ವ್ಯಕ್ತಿತ್ವವನ್ನು ಕೊಂಡಾಡಿದ ಅವರು, 'ಕೂಲಿ' ಚಿತ್ರದ ಅಪಘಾತದ ಸಮಯದಲ್ಲಿ ರಾಜ್‌ಕುಮಾರ್ ಪ್ರಾರ್ಥಿಸಿದ್ದನ್ನು ಸ್ಮರಿಸಿಕೊಂಡರು.

1 Min read
Author : Suchethana D
Published : Oct 26 2025, 03:26 PM IST
Share this Photo Gallery
  • FB
  • TW
  • Linkdin
  • Whatsapp
16
ಮೇರುನಟ ಡಾ.ರಾಜ್​ಕುಮಾರ್​
Image Credit : Instagram

ಮೇರುನಟ ಡಾ.ರಾಜ್​ಕುಮಾರ್​

ಕರ್ನಾಟಕ ಕಂಡ ಅಪರೂಪದ ನಟ, ಡಾ.ರಾಜ್​ಕುಮಾರ್​ ಎನ್ನುವಲ್ಲಿ ಎರಡು ಮಾತೇ ಇಲ್ಲ. ನಟನೆಯಿಂದ ಮಾತ್ರವಲ್ಲದೇ ತಮ್ಮ ವ್ಯಕ್ತಿತ್ವದಿಂದಲೂ ಅವರು ಹೆಸರುವಾಸಿಯಾದವರು. ಕನ್ನಡ ಬಿಟ್ಟು ಬೇರೆ ಭಾಷೆಗಳ ಸಿನಿಮಾಗಳಿಗೂ ಹೋಗದೇ, ರಾಜಕೀಯಕ್ಕೂ ಎಂಟ್ರಿ ಕೊಡದೇ ಸೀದಾ ಸಾದಾ ಜೀವನ ಮಾಡುತ್ತಲೇ ಕೋಟ್ಯಂತರ ಮಂದಿಯ ಅಭಿಮಾನಗಳಿಸಿದವರು ಡಾ.ರಾಜ್​. ಇದೇ ಕಾರಣಕ್ಕೆ ಅವರ ದಶಕಗಳ ಹಿಂದಿನ ಚಿತ್ರಗಳು ಆ ಚಿತ್ರಗಳ ಹಾಡುಗಳು ಇಂದಿಗೂ ಜನಮಾನಸದಲ್ಲಿ ನೆಲೆಯೂರಿ ನಿಂತಿವೆ.

26
ರಾಜ್​ಕುಮಾರ್​ರನ್ನು ಹೊಗಳಿದ ಬಿಗ್​-ಬಿ
Image Credit : SOCIAL MEDIA

ರಾಜ್​ಕುಮಾರ್​ರನ್ನು ಹೊಗಳಿದ ಬಿಗ್​-ಬಿ

ಇಂಥ ಡಾ.ರಾಜ್​ಕುಮಾರ್​ ಅವರನ್ನು ಬಾಲಿವುಡ್​ ಬಿಗ್​ ಬಿ ಅಮಿತಾಭ್ ಬಚ್ಚನ್​ ಅವರು ಹಾಡಿ ಕೊಂಡಾಡಿದ್ದಾರೆ. ಕೌನ್​ ಬನೇಗಾ ಕರೋಡ್​ಪತಿ ಸಂದರ್ಭದಲ್ಲಿ ರಿಷಬ್​ ಶೆಟ್ಟಿ (Rishab Shetty) ಅವರು ಹಾಟ್​ ಸೀಟ್​ನಲ್ಲಿ ಕುಳಿತ ಸಂದರ್ಭದಲ್ಲಿ ಅಮಿತಾಭ್​ ಅವರು ಡಾ.ರಾಜ್​ ಅವರನ್ನು ಸ್ಮರಿಸುತ್ತಲೇ ಅವರ ಕನ್ನಡದ ದೇವರು ಎಂದು ಹೇಳಿದ್ದಾರೆ.

Related Articles

Related image1
KBC 17: ಅಮಿತಾಭ್​ ಬಚ್ಚನ್​ಗೆ ಅವಮಾನಿಸಿದ ಕಾರಣ ಹೇಳುತ್ತಲೇ ಈ ರೀತಿ ಕ್ಷಮೆ ಕೋರಿದ ಬಾಲಕ! ವಿಡಿಯೋ ವೈರಲ್
Related image2
KBC 17: ಪಾನೀಪುರಿಯಲ್ಲಿ ಯಾವ ಬೆರಳು ಬಳಸಿ ರಂಧ್ರ ಮಾಡ್ತಾರೆ? ಅಮಿತಾಭ್​ ಬಚ್ಚನ್​ಗೇ ಎದುರಾಯ್ತು ಪ್ರಶ್ನೆ!
36
ಡಾ.ರಾಜ್​ ದೇವರು ಇದ್ದಂತೆ
Image Credit : Social Media

ಡಾ.ರಾಜ್​ ದೇವರು ಇದ್ದಂತೆ

​​ರಾಜಕುಮಾರ್ ಅವರನ್ನು ಭೇಟಿಯಾದಾಗಲೆಲ್ಲಾ ಅವರ ಆಶೀರ್ವಾದ ಪಡೆಯುತ್ತಿದ್ದೆ. ಅವರು ನೀಡಿಹೋಗಿರುವ ಕೊಡುಗೆ ಅಪಾರವಾದದ್ದು. ಅವರ ನಟನೆಗೆ ಮತ್ತೊಬ್ಬರು ಸರಿಸಾಟಿಯಾಗಿರಲು ಸಾಧ್ಯವೇ ಇಲ್ಲ. ಅವರೊಬ್ಬ ದೇವರು ಇದ್ದಂತೆ. ತುಂಬಾ ಸಿಂಪಲ್ ವ್ಯಕ್ತಿ. ಅವರನ್ನು ಕಂಡಾಗಲೆಲ್ಲ ನಾನು ಆಶ್ಚರ್ಯ ಪಡುತ್ತಿದ್ದೆ ಎಂದಿದ್ದಾರೆ ಅಮಿತಾಭ್​ ಬಚ್ಚನ್​

46
ಜೀವನ ಶೈಲಿಗೆ ಮೆಚ್ಚುಗೆ
Image Credit : Social Media

ಜೀವನ ಶೈಲಿಗೆ ಮೆಚ್ಚುಗೆ

ಸದಾ ಅವರು ಸರಳ ಬಟ್ಟೆ ಧರಿಸುತ್ತಿದ್ದರು. ಅವರ ಜೀವನ ಶೈಲಿ ನೋಡಿದರೆ ಅಂಥ ದೊಡ್ಡ ನಟನಾ ಎಂದು ಹೇಳಲು ಸಾಧ್ಯವೇ ಇರಲಿಲ್ಲ. ರಾಜ್​ಕುಮಾರ್ ಅವರಂಥ ಮೇರುನಟನ ಆಶೀರ್ವಾದ ಪಡೆದ ನಾವೇ ಧನ್ಯ’ ಎಂದು ಭಾವುಕರಾದರು ಅಮಿತಾಭ್​.

56
ಸಾವು-ಬದುಕಿನ ನಡುವೆ ಹೋರಾಟ
Image Credit : Social Media

ಸಾವು-ಬದುಕಿನ ನಡುವೆ ಹೋರಾಟ

ಇದೇ ವೇಳೆ, 1983ರಲ್ಲಿ ಕೂಲಿ ಚಿತ್ರೀಕರಣದ ಸಮಯದಲ್ಲಿ, ಅಮಿತಾಭ್​ ಬಚ್ಚನ್ ಸಹನಟ ಪುನೀತ್ ಇಸ್ಸಾರ್ ಅವರೊಂದಿಗೆ ಸಾಹಸ ದೃಶ್ಯವನ್ನು ಚಿತ್ರೀಕರಿಸುವಾಗ ಚಾಕು ಇರಿತಕ್ಕೆ ಒಳಗಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು. ಅವರಿಗೆ ತೀವ್ರ ಆಂತರಿಕ ರಕ್ತಸ್ರಾವ ಮತ್ತು ವಾರಗಳವರೆಗೆ ಗಂಭೀರ ಸ್ಥಿತಿಯಲ್ಲಿದ್ದರು. ಅಂಥ ಸಂದರ್ಭದಲ್ಲಿ ಡಾ.ರಾಜ್​ಕುಮಾರ್​ ಕೂಡ ಅಮಿತಾಭ್​ ಅವರಿಗಾಗಿ ಹಲವಾರು ರೀತಿಯಲ್ಲಿ ಪ್ರಾರ್ಥನೆ ಸಲ್ಲಿಸಿರುವುದಾಗಿ ನಟ ತಿಳಿಸಿದ್ದಾರೆ.

66
ಕೊನೆ ಕ್ಷಣದವರೆಗೂ...
Image Credit : Social Media

ಕೊನೆ ಕ್ಷಣದವರೆಗೂ...

"ಅಂದಿನಿಂದ, ಅವರು ನಿಧನರಾಗುವ ದಿನದವರೆಗೂ, ನಾವು ಸಂಪರ್ಕದಲ್ಲಿದ್ದೆವು. ನಾನು ಅವರ ಮಕ್ಕಳೊಂದಿಗೂ ಆತ್ಮೀಯನಾಗಿದ್ದೆ, ಅವರು ಈಗ ತಮ್ಮದೇ ಆದ ರೀತಿಯಲ್ಲಿ ಸ್ಟಾರ್ ಗಳಾಗಿದ್ದಾರೆ ಎಂದು ಅಮಿತಾಭ್​ ತಿಳಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಡಾ. ರಾಜ್‌ಕುಮಾರ್
ಅಮಿತಾಭ್ ಬಚ್ಚನ್
ಕೌನ್ ಬನೇಗಾ ಕರೋಡ್ಪತಿ
ಬಾಲಿವುಡ್
ಸ್ಯಾಂಡಲ್‌ವುಡ್
ಸಂಬಂಧಗಳು

Latest Videos
Recommended Stories
Recommended image1
ಈಡೇರಿದ ಪ್ರಾರ್ಥನೆ; ಪತಿಯೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿದ ಗಾಯಕಿ ಸುಹಾನಾ ಸೈಯದ್
Recommended image2
BBK 12: ಪದೇ ಪದೇ ವಯಸ್ಸಿನ ಕ್ಯಾತೆ ತೆಗೆದ ಗಿಲ್ಲಿ ನಟ; ಅಸಲಿಗೆ ಚೈತ್ರಾ ಕುಂದಾಪುರ ವಯಸ್ಸು ಎಷ್ಟು?
Recommended image3
BBK 12: ಇಂಥ ಸಣ್ಣಬುದ್ಧಿ ಸರಿನಾ? ಗಿಲ್ಲಿ ನಟ ಬೇಡಿದರೂ, ಗೋಗರೆದರೂ ಕೇಳಲಿಲ್ಲ: ರಘು ವಿರುದ್ಧ ರೊಚ್ಚಿಗೆದ್ದ ಜನತೆ
Related Stories
Recommended image1
KBC 17: ಅಮಿತಾಭ್​ ಬಚ್ಚನ್​ಗೆ ಅವಮಾನಿಸಿದ ಕಾರಣ ಹೇಳುತ್ತಲೇ ಈ ರೀತಿ ಕ್ಷಮೆ ಕೋರಿದ ಬಾಲಕ! ವಿಡಿಯೋ ವೈರಲ್
Recommended image2
KBC 17: ಪಾನೀಪುರಿಯಲ್ಲಿ ಯಾವ ಬೆರಳು ಬಳಸಿ ರಂಧ್ರ ಮಾಡ್ತಾರೆ? ಅಮಿತಾಭ್​ ಬಚ್ಚನ್​ಗೇ ಎದುರಾಯ್ತು ಪ್ರಶ್ನೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved