MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Annayya serial: ಪಾರು ಮುಂದೆ ನಡೆಯಲ್ಲ ವೀರಭದ್ರನ‌ ಕುತಂತ್ರ... ಶಾಕ್ ಟ್ರೀಟ್ಮೆಂಟ್ ಕೊಡಲು ಡಾಕ್ಟ್ರಮ್ಮ ರೆಡಿ

Annayya serial: ಪಾರು ಮುಂದೆ ನಡೆಯಲ್ಲ ವೀರಭದ್ರನ‌ ಕುತಂತ್ರ... ಶಾಕ್ ಟ್ರೀಟ್ಮೆಂಟ್ ಕೊಡಲು ಡಾಕ್ಟ್ರಮ್ಮ ರೆಡಿ

ಅಣ್ಣಯ್ಯ ಧಾರಾವಾಹಿಯಲ್ಲಿ ರೌಡಿ ಬೇಬಿ ಪಾರು ಮುಂದೆ ಅಪ್ಪನ ಕರಾಳ ಮುಖದ ಅನಾವರಣ ಮತ್ತೆ ಆಗಿದೆ. ಅಮ್ಮನವರೇ ಪಾರುಗೆ ರಾಣಿ ಮದುವೆ ರಹಸ್ಯ ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ಪಾರು ಇದೀಗ ಅಪ್ಪನ ನಾಟಕವನ್ನು ಕೊನೆಗೊಳಿಸಲು ಶಾಕ್ ಟ್ರೀಟ್ಮೆಂಟ್ ನೀಡೊದಕ್ಕೆ ರೆಡಿಯಾಗಿದ್ದಾಳೆ.

2 Min read
Author : Pavna Das
Published : Oct 24 2025, 04:16 PM IST
Share this Photo Gallery
  • FB
  • TW
  • Linkdin
  • Whatsapp
17
 ಅಣ್ಣಯ್ಯ ಸೀರಿಯಲ್
Image Credit : Asianet News

ಅಣ್ಣಯ್ಯ ಸೀರಿಯಲ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿಯಲ್ಲಿ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದ್ದು, ಆ ಕಾರಣದಿಂದಲೇ ಈ ಧಾರಾವಾಹಿ ಯಾವಾಗಲೂ ಟಾಪ್ ಸ್ಥಾನದಲ್ಲಿರುತ್ತೆ. ಇದೀಗ ಪಾರು ಮುಂದೆ ಅಪ್ಪ ವೀರಭದ್ರನ ನಿಜ ಬಣ್ಣ ಬಯಲಾಗಿದ್ದು ರೌಡಿ ಬೇಬಿ ಸುಮ್ಮನೆ ಬಿಡುವ ಮಾತೆ ಇಲ್ಲ.

27
ವೀರಭದ್ರನ ಕುತಂತ್ರ ಪಾರು ಮುಂದೆ ಬಯಲಾಯ್ತು
Image Credit : Asianet News

ವೀರಭದ್ರನ ಕುತಂತ್ರ ಪಾರು ಮುಂದೆ ಬಯಲಾಯ್ತು

ಈಗಾಗಲೇ ಪಾರುಗೆ ಅಪ್ಪನ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿದೆ. ಆತ ತನ್ನ ತಾಯಂದಿರಿಗೆ ಹಾಗೂ ಶಿವುಗೆ ಏನೆಲ್ಲಾ ದ್ರೋಹ ಮಾಡಿದ್ದಾನೆ ಅನ್ನೋದೆಲ್ಲಾ ತಿಳಿದಿದೆ. ಇದೀಗ ಲಕ್ವಾ ಹೊಡೆದಂತೆ ಮಲಗಿರುವ ಅಪ್ಪನ ಮತ್ತೊಂದು ಕ್ರೂರ ಮುಖ ಬಯಲಾಗಿದೆ.

Related Articles

Related image1
Annayya Serial ರೋಚಕ ಟ್ವಿಸ್ಟ್​! ಕೈಯಲ್ಲಿ ಕತ್ತಿ ಝಳಪಿಸಿ ರಕ್ಕಸರ ಸಂಹಾರಕ್ಕೆ ನಿಂತೇ ಬಿಟ್ಟಳು ಪಾರು
Related image2
Annayya Serial: ಮೂರನೇ ಕಣ್ಣು ಬಿಟ್ಟ ಶಿವ... ರೌದ್ರಾವತಾರ ನೋಡಿ ಕೋಟಿಗೊಬ್ಬ ವಿಷ್ಣುದಾದ ನೆನಪಾದ್ರು
37
ಅಮ್ಮ ಬಾಯಿಬಿಟ್ಟರು ಸತ್ಯ
Image Credit : Asianet News

ಅಮ್ಮ ಬಾಯಿಬಿಟ್ಟರು ಸತ್ಯ

ಪಾರುವಿಗೆ ಕರೆ ಮಾಡುವ ಅಮ್ಮ ರಾಣಿ ಮದುವೆಯಾಗಿರುವ ಹುಡುಗ ದಡ್ಡ, ಆ ಮದುವೆಯನ್ನು ಗೊತ್ತಿದ್ದು, ಮಾಡಿಸಿದ್ದು ನಿಮ್ಮ ಅಪ್ಪ ಎನ್ನುತ್ತಾರೆ. ಇದರಿಂದ ಪಾರು ಶಾಕ್ ಆಗುತ್ತಾಳೆ. ಅಮ್ಮನಿಗೆ ಬುದ್ದಿ ಕಲಿಸೋಕೆ ತೀರ್ಮಾನಿಸಿಯೇ ಮನೆಗೆ ಬರುತ್ತಾಳೆ.

47
ಅಪ್ಪನ ಗ್ರಹಚಾರ ಬಿಡಿಸೋಕೆ ಬಂದೇಬಿಟ್ಲು ಮಗಳು
Image Credit : Asianet News

ಅಪ್ಪನ ಗ್ರಹಚಾರ ಬಿಡಿಸೋಕೆ ಬಂದೇಬಿಟ್ಲು ಮಗಳು

ಇದೀಗ ಮನೆಗೆ ಬಂದಿರುವ ಪಾರು ಅಪ್ಪನ ಮುಂದೆ ನಿಂತು ಆತನಿಗೆ ಅಪಹಾಸ್ಯ ಮಾಡುತ್ತಾ, ನಿನ್ನಂತ ನೀಚ ಇಲ್ಲ ಎನ್ನುತ್ತಾಳೆ. ನೀನು ಮೊದಲನೇ ದಿನ ಮಲಗಿದಾಗಲೇ ನೀನು ನಾಟಕ ಮಾಡೋದು ಗೊತ್ತಾಗಿದೆ. ಶಾಕ್ ಟ್ರೀಟ್ಮೆಂಟ್ ಕೊಟ್ರೆ ಎಲ್ಲಾ ಸರಿಯಾಗುತ್ತೆ ಎನ್ನುತ್ತಾಳೆ ಪಾರು.

57
ಅಪ್ಪನಿಗೆ ಶಾಕ್ ಹೊಡೆಸ್ತಾಳ ಪಾರು
Image Credit : Asianet News

ಅಪ್ಪನಿಗೆ ಶಾಕ್ ಹೊಡೆಸ್ತಾಳ ಪಾರು

ವೈರ್ ನ್ನು ಅಪ್ಪನ್ನ ಕೈಗೆ ಕಟ್ಟಿ, ಅದನ್ನು ಪ್ಲಗ್ ಮಾಡಿ, ಇನ್ನೇನು ಸ್ವಿಚ್ ಆನ್ ಮಾಡುತ್ತಾ, ಈ ಶಾಕ್ ಟ್ರೀಟ್ಮೆಂಟ್ ಕೊಟ್ರೆ ನೀನು ಜಿಂಕೆ ಮರಿಯಂತೆ ಎದ್ದು ನಡೆಯುವೆ ಎನ್ನುತ್ತಾಳೆ. ಈಗ ನಿಜವಾಗಿಯೂ ಪಾರು ಶಾಕ್ ಟ್ರೀಟ್ಮೆಂಟ್ ಕೊಡ್ತಾಳ, ಅಥವಾ ಅಪ್ಪ ಎದ್ದು ಕುಳಿತುಕೊಳ್ಳುತ್ತಾನ ಕಾದು ನೋಡಬೇಕು.

67
ಪಾರು ಅಂದ್ರೆ ಸುಮ್ನೇನಾ
Image Credit : Asianet News

ಪಾರು ಅಂದ್ರೆ ಸುಮ್ನೇನಾ

ಇದೀಗ ಪ್ರೊಮೋ ನೋಡಿರುವ ವೀಕ್ಷಕರು ಇಷ್ಟಪಟ್ಟಿದ್ದು, ಸೂಪರ್ ಪಾರು, ಪಾರು ಅಂದ್ರೆ ಸುಮ್ನೇನಾ, ಬೆಂಕಿ ನಮ್ ಪಾರು, ಆ ಬಾಂಡ್ಲಿ ಮಾವನಿಗೆ ಹಾಗೆಯೇ ಆಗಬೇಕು. ಪಾರು ವೀರಭದ್ರನ ಗ್ರಹಚಾರ ಬಿಡಿಸೋದನ್ನು ನೋಡೊದಕ್ಕೆ ಕಾಯ್ತಿದ್ದೇವೆ ಎಂದಿದ್ದಾರೆ.

77
ವೀರಭದ್ರ ನಾಟಕ ಮಾಡ್ತಿರೋದು ಯಾಕೆ?
Image Credit : Asianet News

ವೀರಭದ್ರ ನಾಟಕ ಮಾಡ್ತಿರೋದು ಯಾಕೆ?

ಅಮ್ಮನನ್ನು ರೌಡಿಗಳಿಂದ ಉಳಿಸೋದಕ್ಕೆ ಸ್ವತಃ ಶಿವುಗೆ ಬಂದು ಬಿಡಿಸಿಕೊಂಡು ಹೋಗಿರೋದು ಗೊತ್ತಾದ ತಕ್ಷಣ, ಇನ್ನು ಶಿವು ಕೈಯಿಂದ ನನಗೆ ಉಳಿಗಾಲವಿಲ್ಲ ಎನ್ನುತ್ತಾ ಲಕ್ವಾ ಹೊಡೆದ ನಾಟಕ ಶುರು ಮಾಡಿದ್ದನ್ನು ವೀರಭದ್ರ. ಇದೀಗ ಪಾರು ಕೈಗೆ ಸಿಕ್ಕಿ ಬಿದ್ದಿದ್ದು, ಮುಂದೆ ಏನಾಗುತ್ತೆ ಅನ್ನೋದನ್ನು ಕಾದು ನೋಡಬೇಕು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಅಣ್ಣಯ್ಯ ಧಾರಾವಾಹಿ
ಕನ್ನಡ ಧಾರಾವಾಹಿ
ಸೀರಿಯಲ್ ಶೂಟಿಂಗ್

Latest Videos
Recommended Stories
Recommended image1
ಅಡುಗೆ ಮಾಡೋ ಯೂಟ್ಯೂಬರ್ಸ್‌ ಗೆ ಒಳ್ಳೆ ಸಲಹೆ ಕೊಟ್ಟ ಕಿರುತೆರೆ ನಟಿ ನಯನಾ
Recommended image2
Bigg Boss: ರಕ್ಷಿತಾ ಮೇಲೆ ಸುದೀಪ್​ ತೋರಿದ ಸಿಟ್ಟು ಅಶ್ವಿನಿ ಮೇಲೆ ಯಾಕಿಲ್ಲ? ವಿನಯ್ ಗೌಡ ಓಪನ್ನಾಗಿ ಹೇಳಿದ್ದೇನು?
Recommended image3
Bigg Boss: 'ಆಯ್ತಣ್ಣಾ, ಆಯ್ತಣ್ಣಾ' ಹೇಳಿ ರಘು ಸಿಟ್ಟು ನೆತ್ತಿಗೇರಿಸಿದ ಗಿಲ್ಲಿ ನಟ! ಬೆಂಕಿಗೆ ತುಪ್ಪ ಸುರಿದ ರಜತ್​
Related Stories
Recommended image1
Annayya Serial ರೋಚಕ ಟ್ವಿಸ್ಟ್​! ಕೈಯಲ್ಲಿ ಕತ್ತಿ ಝಳಪಿಸಿ ರಕ್ಕಸರ ಸಂಹಾರಕ್ಕೆ ನಿಂತೇ ಬಿಟ್ಟಳು ಪಾರು
Recommended image2
Annayya Serial: ಮೂರನೇ ಕಣ್ಣು ಬಿಟ್ಟ ಶಿವ... ರೌದ್ರಾವತಾರ ನೋಡಿ ಕೋಟಿಗೊಬ್ಬ ವಿಷ್ಣುದಾದ ನೆನಪಾದ್ರು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved