MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Bigg Bossಗೆ ವೈಲ್ಡ್​ ಕಾರ್ಡ್​ ಎಂಟ್ರಿ! Dharmasthala ಸುಜಾತಾ ಭಟ್​ ಕೊಟ್ಟೇ ಬಿಟ್ರು ಬಿಗ್​ ಅಪ್​ಡೇಟ್​!

Bigg Bossಗೆ ವೈಲ್ಡ್​ ಕಾರ್ಡ್​ ಎಂಟ್ರಿ! Dharmasthala ಸುಜಾತಾ ಭಟ್​ ಕೊಟ್ಟೇ ಬಿಟ್ರು ಬಿಗ್​ ಅಪ್​ಡೇಟ್​!

ಸೌಜನ್ಯ ಪ್ರಕರಣದಲ್ಲಿ ಅನನ್ಯಾ ಭಟ್ ಎಂಬ ಕಾಲ್ಪನಿಕ ಪಾತ್ರ ಸೃಷ್ಟಿಸಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ಸುಜಾತಾ ಭಟ್, ಇದೀಗ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಧರ್ಮಸ್ಥಳದ ಕ್ಷಮೆ ಕೋರುವುದಾಗಿ ಹೇಳಿರುವ ಅವರು, ಬಿಗ್‌ಬಾಸ್‌ಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಹೋಗುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

2 Min read
Author : Suchethana D
Published : Oct 12 2025, 11:23 AM IST
Share this Photo Gallery
  • FB
  • TW
  • Linkdin
  • Whatsapp
16
ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ಸುಜಾತಾ ಭಟ್​
Image Credit : Asianet News

ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ಸುಜಾತಾ ಭಟ್​

ಸುಜಾತಾ ಭಟ್​ (Sujata Bhat) ಎನ್ನುವ ಹೆಸರು ಕಳೆದ ಕೆಲವು ತಿಂಗಳುಗಳಿಂದ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಮಹಾ ಮೋಸಗಾರರು, ಮಹಾ ಸುಳ್ಳುಗಾರರನ್ನೂ ಮೀರಿಸಿದ, ಕಲ್ಪನೆಯ ಕಥೆಯನ್ನು ಬರೆಯುವ ಬರಹಗಾರರನ್ನೂ ಮೀರಿಸಿದ ಸುಜಾತಾ ಭಟ್​, ಅಸ್ತಿತ್ವದಲ್ಲಿಯೇ ಇಲ್ಲದ ಪಾತ್ರವೊಂದನ್ನು ಸೃಷ್ಟಿಸಿ, ಮಾಧ್ಯಮದವರ ಎದುರೂ ಕಣ್ಣಿಗೆ ಕಟ್ಟುವಂತೆ ಕಥೆ ಹೇಳಿ ಎಲ್ಲರ ಕಣ್ಣಿನಲ್ಲಿಯೂ ನೀರು ತರಿಸಿದ ಮಹಾ ಮಹಿಳೆ ಈಕೆ! ಹಿಂದೂ ಧರ್ಮಕ್ಕೆ, ಧರ್ಮಸ್ಥಳಕ್ಕೆ ಕಪ್ಪು ಚುಕ್ಕೆ ಇಡಲು AI ಮೂಲಕ ವಿಡಿಯೋ ಮಾಡಿ ಹರಿಬಿಡುವವರ, ರಾಜಕೀಯ ದುರುದ್ದೇಶದಿಂದ ವಿಷಬೀಜ ಬಿತ್ತಲು ಬಯಸಿದವರಿಗೆ ದಾಳವಾಗಿ ಬಳಕೆಯಾಗಿದ್ದ ಸುಜಾತಾ ಭಟ್​, ಕೊನೆಗೂ ತಪ್ಪು ಒಪ್ಪಿಕೊಂಡು, ಈಕೆಯನ್ನೇ ನಂಬಿಕೊಂಡಿದ್ದವರಿಗೆ ಶಾಕ್​ ಕೊಟ್ಟಾಕೆ!

26
ಸೌಜನ್ಯಳ ಹೆಸರಿನಲ್ಲಿ ಬೇರೆಯದ್ದೇ ಉದ್ದೇಶ
Image Credit : Google

ಸೌಜನ್ಯಳ ಹೆಸರಿನಲ್ಲಿ ಬೇರೆಯದ್ದೇ ಉದ್ದೇಶ

ಬರ್ಬರವಾಗಿ ಹತ್ಯೆಗೀಡಾದ ಸೌಜನ್ಯಳಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ಶುರುವಾದ Justice For Soujanya ವಿಭಿನ್ನ ಹಾದಿಯನ್ನೇ ತುಳಿದು, ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿರುವುದು ತಿಳಿದೇ ಇದೆ. ಸೌಜನ್ಯಳ ಹೆಸರಿನಲ್ಲಿ ರಾಜಕೀಯ, ಧರ್ಮ ಎಲ್ಲವನ್ನೂ ಎಳೆದು ತಂದು ಧರ್ಮಸ್ಥಳದ ಹೆಸರನ್ನು ಹಾಳುಮಾಡಲು ದೊಡ್ಡ ಸಂಚೇ ನಡೆದಿದ್ದು, ಅದರ ಸತ್ಯಾಸತ್ಯತೆ ಇನ್ನೂ ಹೊರಬರಬೇಕಿದೆ. ಇದಾಗಲೇ ಕೆಲವು ಪ್ರಮುಖ ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡದ್ದೂ ಆಗಿದೆ. ಇದರ ಹಿಂದೆ ಇರುವ ಕೈಗಳ ಬಗ್ಗೆಯೂ ಎಲ್ಲರಿಗೂ ತಿಳಿದೇ ಇದ್ದರೂ, ಸಾಕ್ಷ್ಯಾಧಾರಗಳು ಸಿಕ್ಕು ಅವರೇ ನಿಜವಾದ ಅಪರಾಧಿಗಳು ಎಂದು ಕಾನೂನು ಪ್ರಕಾರ ಸಾಬೀತು ಆಗಬೇಕಿದೆಯಷ್ಟೇ. ಇವೆಲ್ಲವುಗಳ ನಡುವೆಯೇ ಹೈಲೈಟ್​ ಆಗಿದ್ದು ಅಸ್ತಿತ್ವದಲ್ಲಿಯೇ ಇಲ್ಲದ ಅನನ್ಯಾ ಭಟ್​ (Ananya Bhat). ಹಾಗೂ ಈಕೆಯ ಸೃಷ್ಟಿಕರ್ತೆ ಸುಜಾತಾ ಭಟ್​

Related Articles

Related image1
Bigg Boss ಮನೆಯಲ್ಲೇ ನಟಿಯ ಮದ್ವೆ, ಅಲ್ಲೇ ಫಸ್ಟ್​ನೈಟ್​ ! ಹೊರಬಂದು ಬೇರೆಯವರ ಜೊತೆ ವಿವಾಹ-ಈಕೆ ಸ್ಟೋರಿ ಕೇಳಿ
Related image2
ಹೆಣ್ಣೆಂದು ತಿಳಿದು ಎಲ್ಲೆಲ್ಲೋ ಉಜ್ಜಲು ಬಂದ ಅಜ್ಜ, ಆಮೇಲೆ? ಸೀರೆಯುಟ್ಟ ಕಾಮಿಡಿ ನಟ ರಾಘವೇಂದ್ರನ ಫಜೀತಿ ಕೇಳಿ
36
ಬಾಗಿಲು ಬಂದಾದಾಗ ತಪ್ಪು ಒಪ್ಪಿಕೊಂಡಾಕೆ!
Image Credit : Asianet News

ಬಾಗಿಲು ಬಂದಾದಾಗ ತಪ್ಪು ಒಪ್ಪಿಕೊಂಡಾಕೆ!

ಎಲ್ಲಾ ದಿಕ್ಕುಗಳಿಂದಲೂ ಬಾಗಿಲು ಬಂದಾದಾಗ ತಪ್ಪು ಒಪ್ಪಿಕೊಂಡಿದ್ದಾರೆ ಸುಜಾತಾ ಭಟ್​. ಈಗ ತಮ್ಮ ವರಸೆ ಬದಲಾಯಿಸಿದ್ದಾರೆ. ಜೀವನದಲ್ಲಿ ಒಂದೂ ನನ್ನ ಮೇಲೆ ಕಪ್ಪು ಚುಕ್ಕೆ ಇರಲಿಲ್ಲ. ತುತ್ತು ಅನ್ನಕ್ಕೂ ಕಷ್ಟವಾದಾಗಲೂ ಎಲ್ಲಿಯೂ ಬೇಡದೇ ತಿಂದವಳು ನಾನು. ಅಂಥ ಒಳ್ಳೆಯವಳಾದ ನನ್ನನ್ನು ಬಳಸಿಕೊಂಡು ಬಿಟ್ಟರು. ನಾನು ಧರ್ಮಸ್ಥಳಕ್ಕೆ ಹೋಗಿ ಹೆಗ್ಗಡೆಯವರಲ್ಲಿ ಕ್ಷಮೆ ಕೋರುವೆ ಎಂದು ಮಾಧ್ಯಮಗಳ ಮುಂದೆ ಬಂದು ಗೋಳೋ ಎನ್ನುತ್ತಿದ್ದಾರೆ ಈ ಸುಜಾತಾ ಭಟ್​.

46
ಬಿಗ್​ಬಾಸ್​ಗೆ ವೈಲ್ಡ್​ ಕಾರ್ಡ್​ ಎಂಟ್ರಿ
Image Credit : stockPhoto

ಬಿಗ್​ಬಾಸ್​ಗೆ ವೈಲ್ಡ್​ ಕಾರ್ಡ್​ ಎಂಟ್ರಿ

ಇದೀಗ ಇನ್ನೊಂದು ವಿಷಯವನ್ನೂ ಈಕೆ ಹೊರಗೆಡವಿದ್ದಾರೆ. ಅದೇನೆಂದರೆ, ಬಿಗ್​ಬಾಸ್​ಗೆ ಹೋಗುವ ಆಸೆಯಂತೆ ಇವರಿಗೆ. ಒಂದು ದಿನದ ಮಟ್ಟಿಗಾದರೂ ನಾನು Bigg Bossಗೆ ಹೋಗಬೇಕು. Wild Card Entry ಮೂಲಕ ಹೋಗುವ ಆಸೆ ಇದೆ. ಅದು ನನ್ನ ದೊಡ್ಡ ಆಸೆ. ಬಿಗ್​ಬಾಸ್​​ ಮನೆಯೊಳಕ್ಕೆ ಹೋಗಿ ಬರಲು ತುಂಬಾ ಉತ್ಸುಕಳಾಗಿದ್ದೇನೆ ಎಂದಿದ್ದಾರೆ.

56
ಹೋದರೂ ಅಚ್ಚರಿಯಿಲ್ಲ ಬಿಡಿ!
Image Credit : Asianet News

ಹೋದರೂ ಅಚ್ಚರಿಯಿಲ್ಲ ಬಿಡಿ!

ಅಷ್ಟಕ್ಕೂ ಇಂಥವರಿಗಾಗಿಯೇ ಬಿಗ್​ಬಾಸ್​ನ ಬಾಗಿಲು ಸದಾ ತೆರೆದಿರುವುದು ಗುಟ್ಟಾಗಿ ಉಳಿದಿರುವ ವಿಷಯವೇನಲ್ಲ. ಕಾಂಟ್ರವರ್ಸಿ ಮಾಡಿಕೊಂಡವರು, ಜೈಲಿಗೆ ಹೋದವರು, ಕೆಟ್ಟ ಹೆಸರು ಪಡೆದವರು, ಕ್ರಿಮಿನಲ್​ ಮೈಂಡ್​ನವರು ಇಂಥವರಿಗೇ ಮಣೆ ಹಾಕುವುದು ಎಲ್ಲಾ ಭಾಷೆಗಳ ಬಿಗ್​ಬಾಸ್​​ನಲ್ಲಿ ಇದ್ದೇ ಇದೆ. ಮೊದಲ ಕೆಲವು ವಾರಗಳಲ್ಲಿಯೇ ಎಲಿಮಿನೇಟ್​ ಮಾಡಿ ಮನೆಯಿಂದ ಹೊರಕ್ಕೆ ಹಾಕುವ ಸಂಬಂಧ ಒಂದಿಷ್ಟು ಸಮಾಜದಲ್ಲಿ ಒಳ್ಳೆಯ ಹೆಸರು ಮಾಡಿದವರನ್ನು ಬಿಗ್​ಬಾಸ್​ ಆಯ್ಕೆ ಮಾಡುತ್ತಾರೆ ಎನ್ನುವ ಮಾತು ಮೊದಲಿನಿಂದಲೂ ಇದೆ.

66
ಇಂಥವರಿಗೆ ತಾನೇ ಮಣೆ?
Image Credit : Google

ಇಂಥವರಿಗೆ ತಾನೇ ಮಣೆ?

ಇದೇ ಕಾರಣಕ್ಕೆ, ಇದೀಗ ಸುಜಾತಾ ಭಟ್​ ಹೋದರೂ ಅಚ್ಚರಿಯೇನಿಲ್ಲ. ಅಷ್ಟಕ್ಕೂ ಇವರು ಯಾವಾಗ ಧರ್ಮಸ್ಥಳದ ಪ್ರಕರಣದಲ್ಲಿ ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳಿನ ಕಂತೆಗಳನ್ನೇ ತೆರೆದಿಟ್ಟರೋ, ನನ್ನ ಕಾಣೆಯಾದ ಮಗಳು ಅನನ್ಯಾ ಭಟ್​ ಬೇಕು ಎಂದು ಮಾಧ್ಯಮಗಳ ಮುಂದೆ ಕಣ್ಣೀರು ಸುರಿಸಿದರೋ, ಅನನ್ಯಾ ಎನ್ನುವವರು ಇಲ್ಲೇ ಇಲ್ಲ ಎಂದು ಸಾಬೀತಾದಾಗಲೂ ಅವಳು ಇದ್ದಾಳೆ ಎಂದು ಒಂದಿನಿತು ಸಂಶಯ ಬರದಂತೆ ರಪರಪ ಎನ್ನುತ್ತಾ ರೀಲು ಬಿಟ್ಟರೋ ಆಗಲೇ ಬಿಗ್​ಬಾಸ್​ಗೆ ಹೋಗುತ್ತಾರೆ ಎಂದು ಸುದ್ದಿಯಾಗಿತ್ತು. ಅದ್ಯಾಕೋ ಆಗ ಆಗಿರಲಿಲ್ಲ. ಈಗ ವೈಲ್ಡ್​ ಕಾರ್ಡ್​ ಎಂಟ್ರಿ ಸಿಕ್ಕರೆ ಅಚ್ಚರಿಯೇನಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಿಗ್ ಬಾಸ್ ಕನ್ನಡ
ಬಿಗ್ ಬಾಸ್
ಕಲರ್ಸ್ ಕನ್ನಡ
ಕಿಚ್ಚ ಸುದೀಪ್
ಸುಜಾತಾ ಭಟ್

Latest Videos
Recommended Stories
Recommended image1
3 ಕೋಟಿ ಆಸ್ತಿ ಒಡತಿ ಆಗ್ತಿದ್ದಂತೆಯೇ ಬದಲಾಯ್ತು Karna Serial ನಿತ್ಯಾ ಲುಕ್​! ನಟಿಯ ಕ್ಯೂಟ್​ ಫೋಟೋಶೂಟ್​
Recommended image2
‌ದೊಡ್ಮನೆ ಹಬ್ಬ ಮಾಡಿ Bigg Boss ಸ್ಪರ್ಧಿಗಳ ಗುಟ್ಟು ರಟ್ಟು ಮಾಡಿದ Bhagyalakshmi Serial ನಟಿ ಸುಷ್ಮಾ ರಾವ್
Recommended image3
Amruthadhaare Serial Twist: ಮರಳಲಿದೆ ಗೌತಮ್​ ದಿವಾನ್​ ಸಾಮ್ರಾಜ್ಯ- ಬಿಟ್ಟಿ ತಿಂದವರು ಬೀದಿಗೆ!
Related Stories
Recommended image1
Bigg Boss ಮನೆಯಲ್ಲೇ ನಟಿಯ ಮದ್ವೆ, ಅಲ್ಲೇ ಫಸ್ಟ್​ನೈಟ್​ ! ಹೊರಬಂದು ಬೇರೆಯವರ ಜೊತೆ ವಿವಾಹ-ಈಕೆ ಸ್ಟೋರಿ ಕೇಳಿ
Recommended image2
ಹೆಣ್ಣೆಂದು ತಿಳಿದು ಎಲ್ಲೆಲ್ಲೋ ಉಜ್ಜಲು ಬಂದ ಅಜ್ಜ, ಆಮೇಲೆ? ಸೀರೆಯುಟ್ಟ ಕಾಮಿಡಿ ನಟ ರಾಘವೇಂದ್ರನ ಫಜೀತಿ ಕೇಳಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved